ಜಮ್ಮು ಕಾಶ್ಮೀರದಲ್ಲಿ ಯುದ್ಧದ ಛಾಯೆ: ಸರ್ಕಾರಿ ವೈದ್ಯರ ರಜೆ ರದ್ದು, ಗಡಿಯಲ್ಲಿ ಉದ್ವಿಗ್ನತೆ
ಜಮ್ಮು ಕಾಶ್ಮೀರ:ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದ್ದು, ಯುದ್ಧದ ಸನ್ನಿವೇಶಕ್ಕೆ ಸಿದ್ಧತೆಗಳು ತೀವ್ರಗೊಂಡಿವೆ. ಪಾಕಿಸ್ತಾನದೊಂದಿಗಿನ ಸಂಬಂಧ ಕ್ಷೀಣಿಸಿರುವ ಬೆನ್ನಲ್ಲೇ, ಜಮ್ಮು ಕಾಶ್ಮೀರದಲ್ಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ವೈದ್ಯರು, ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ರಜೆಗಳನ್ನು ರದ್ದುಗೊಳಿಸಲಾಗಿದೆ.
ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿದ ನಂತರ ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ. ಎರಡೂ ದೇಶಗಳ ಸೇನೆಗಳು ತಮ್ಮ ಸನ್ನದ್ಧತೆಯನ್ನು ಹೆಚ್ಚಿಸಿರುವುದು ಆತಂಕಕಾರಿ ವಾತಾವರಣವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಸರ್ಕಾರವು ತುರ್ತು ಸೇವೆಗಳಿಗಾಗಿ ವಿಶೇಷ ಹೆಲ್ಪ್ಲೈನ್ ಸಂಖ್ಯೆಯನ್ನು ಪ್ರಕಟಿಸಿದೆ.
ಇದನ್ನೂ ಓದಿ: Pahalgam Attack: ಉಗ್ರನ ಸಹೋದರಿಯ ಆಘಾತಕಾರಿ ಹೇಳಿಕೆ, “ನನ್ನ ಅಣ್ಣ ಮುಜಾಹಿದ್ದೀನ್” (ಸಣ್ಣ ಉಗ್ರಗಾಮಿ)

ಭಾರತೀಯ ಸೇನೆಯು ಗಡಿಯಾದ್ಯಂತ ಸೇನಾ ವಾಹನಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದು, ಯಾವುದೇ ಸಂದರ್ಭಕ್ಕೂ ಸನ್ನದ್ಧವಾಗಿರಲು ಕ್ರಮ ಕೈಗೊಂಡಿದೆ. ಈ ಎಲ್ಲಾ ಬೆಳವಣಿಗೆಗಳು ಯುದ್ಧಕ್ಕೆ ಸಿದ್ಧತೆಯ ಸೂಚನೆಯಾಗಿರುವಂತೆ ಕಾಣುತ್ತಿವೆ. ಸ್ಥಳೀಯ ಜನತೆಯಲ್ಲಿ ಆತಂಕ ಮನೆಮಾಡಿದ್ದು, ಸರ್ಕಾರದ ಮುಂದಿನ ಕ್ರಮಗಳ ಬಗ್ಗೆ ಕುತೂಹಲ ಕಾಡುತ್ತಿದೆ.