Newsten DigitalNewsten DigitalNewsten Digital
Notification
Font ResizerAa
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Reading: ಕಲ್ಲತ್ತಿಗಿರಿ ಜಲಪಾತ: ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತ
Share
Font ResizerAa
Newsten DigitalNewsten Digital
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Search
  • ದೇಶ
  • ವಿದೇಶ
  • ವೈರಲ್​
  • ಮನರಂಜನೆ
  • ಬ್ಯುಸಿನೆಸ್
  • ತಂತ್ರಜ್ಞಾನ
  • ಹಣಕಾಸು
  • ಪ್ರವಾಸ
  • ಆರೋಗ್ಯ & ಫಿಟ್ನೆಸ್
  • ಆಟೋಮೊಬೈಲ್
  • ಲೈಫ್ ಸ್ಟೈಲ್
  • ಉದ್ಯೋಗ
  • Web Stories
Follow US
Newsten Digital > Blog > ಪ್ರವಾಸ > ಕಲ್ಲತ್ತಿಗಿರಿ ಜಲಪಾತ: ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತ

ಕಲ್ಲತ್ತಿಗಿರಿ ಜಲಪಾತ: ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತ

Web Desk
Last updated: July 5, 2024 2:29 pm
Web Desk Published July 5, 2024
Share
2 Min Read
ಕಲ್ಲತ್ತಿಗಿರಿ ಜಲಪಾತ: ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತ

ಕಲ್ಲತ್ತಿಗಿರಿ ಜಲಪಾತಕ್ಕೆ ಹೋಗುವ ಮಾರ್ಗದುದ್ದಕ್ಕೂ ಕಾಣುವ ರಮಣೀಯ ನೋಟವು ಕಣ್ಣಿಗೆ ರಸದೌತಣವನ್ನ ನೀಡುತ್ತದೆ. ಹಚ್ಚ ಹಸಿರಿನ ಪ್ರಕೃತಿಯ ಸೊಬಗು ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಈ ಜಲಪಾತವು, ಈಗ ಪ್ರಕೃತಿಯ ಮಾನಸ ಪುತ್ರಿಯಂತಾಗಿದೆ.

Contents
ಕಲ್ಲತ್ತಿಗಿರಿ ಜಲಪಾತದ ವೈಶಿಷ್ಟ್ಯಗಳುಧಾರ್ಮಿಕ ಇತಿಹಾಸಪುರಾಣದ ಕಥೆಪ್ರವಾಸ ಮತ್ತು ನಿಸರ್ಗ

ಕಲ್ಲತ್ತಿಗಿರಿ ಜಲಪಾತದ ವೈಶಿಷ್ಟ್ಯಗಳು

ಗುಡ್ಡದ ತುದಿಯಿಂದ ಹರಿಯುವ ಹಾಲಿನಂತೆ ಬಿಳಿಯ ಈ ಜಲಪಾತ, ಕಲ್ಲತ್ತಿಗಿರಿ ಜಲಪಾತ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದೆ. ಇತಿಹಾಸದಲ್ಲಿ ಈ ಜಲಪಾತ ಬತ್ತಿದದ್ದಿಲ್ಲ. ಬೆಟ್ಟ-ಗುಡ್ಡಗಳ ಔಷಧಿ ಶಕ್ತಿಯುಳ್ಳ ಮರ-ಗಿಡಗಳ ನಡುವೆ ಹರಿಯುವ ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಕೆಲ ಕಾಯಿಲೆಗಳು ದೂರವಾಗಿ ಪುಣ್ಯ ಬರುತ್ತದೆ ಎನ್ನುವ ಜನರ ನಂಬಿಕೆ.

ಕಲ್ಲತ್ತಿಗಿರಿ ಜಲಪಾತ Kalhattigiri Falls

ಧಾರ್ಮಿಕ ಇತಿಹಾಸ

ಆನೆ ಆಕಾರದಲ್ಲಿರುವ ಈ ಜಲಪಾತಕ್ಕೆ ಧಾರ್ಮಿಕ ಇತಿಹಾಸವೂ ಇದೆ. ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಶಾಲಾ ಮಕ್ಕಳೇ ಹೆಚ್ಚು. ಈ ತಾಣ ಇಡೀ ರಾಜ್ಯಕ್ಕೆ ಗೊತ್ತಿರುವ ಪ್ರಸಿದ್ಧ ಸ್ಥಳ. ಮಕ್ಕಳಷ್ಟೇ ಅಲ್ಲದೇ ಈಗ ಕುಟುಂಬ ಸಮೇತರಾಗಿ ಬಂದು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ. ಶತಮಾನಗಳಿಂದ ನಿರಂತರವಾಗಿ ಹರಿಯುತ್ತಿರುವ ಈ ಜಲಪಾತದ ಬಳಿ ದತ್ತಾತ್ರೇಯ, ಈಶ್ವರ-ಪಾರ್ವತಿ, ಗಣಪತಿ, ಬೇಲೂರು ಚನ್ನಕೇಶವನ ಜೊತೆ ಶಿಲಾ ಬಾಲಿಕೆಯರ ಉದ್ಭವ ಮೂರ್ತಿಗಳಿವೆ.

Also Read: ಮಧ್ಯರಾತ್ರಿ ವಿಚಿತ್ರ ಕೂಗು – ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ. ಬ್ರೋ

- Advertisement -
ಕಲ್ಲತ್ತಿಗಿರಿ ಜಲಪಾತ Kalhattigiri Falls Chikkamagaluru

ಪುರಾಣದ ಕಥೆ

ನರಮನುಷ್ಯರು ಇಲ್ಲಿ ಬಂದು ಈ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಇಲ್ಲಿನ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿದ್ರೆ ಅವರ ಪಾಪ-ಕರ್ಮಗಳೆಲ್ಲಾ ಪರಿಹಾರವಾಗುತ್ತವೆ ಎನ್ನುವುದು ಸ್ಥಳೀಯರ ನಂಬಿಕೆ. ಪವಿತ್ರ ಗಂಗೆಯಾಗಿರುವ ಈ ಕ್ಷೇತ್ರದಲ್ಲಿ ಕಲ್ಲಿನ ಗುಹೆಯೊಳಗೆ ವೀರಭದ್ರಸ್ವಾಮಿ ಮೂರ್ತಿ ಕೂಡ ಉದ್ಭವವಾಗಿದೆ. ಇಲ್ಲಿಗೆ ಬಂದು ಸ್ನಾನ ಮಾಡಿ, ಪೂಜೆ ಸಲ್ಲಿಸಿದರೆ ಜನರ ಮೈಮೇಲೆ ಬರುವ ದುಷ್ಟಶಕ್ತಿಗಳನ್ನು ವೀರಭದ್ರಸ್ವಾಮಿ ನಾಶ ಮಾಡುತ್ತಾನೆ ಎನ್ನುವುದು ಸ್ಥಳೀಯರ ನಂಬಿಕೆ.

ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತ kallathigiri waterfalls attracting tourists in chikkmagalur

ಪ್ರವಾಸ ಮತ್ತು ನಿಸರ್ಗ

ಪ್ರತಿದಿನ ಹತ್ತಾರು ಜನ ಈ ಕ್ಷೇತ್ರಕ್ಕೆ ಬಂದು ದೇವರುಗಳಿಗೆ ಪೂಜೆ-ಕೈಂಕರ್ಯ ಕೈಗೊಳ್ಳುತ್ತಾರೆ. ಪೂಜೆಯ ಬಳಿಕ ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯವನ್ನು ಕಂಡು ಪುಳಕಿತರಾಗುತ್ತಾರೆ. ಕಲ್ಲತ್ತಿಗಿರಿ ಜಲಪಾತಕ್ಕೆ ಹೋಗುವ ಮಾರ್ಗದುದ್ದಕ್ಕೂ ಕಾಣುವ ರಮಣೀಯ ನೋಟವು ಕಣ್ಣಿಗೆ ರಸದೌತಣವನ್ನ ನೀಡುತ್ತದೆ. ಹಚ್ಚ ಹಸಿರಿನ ಪ್ರಕೃತಿಯ ಸೊಬಗು ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ.

ಒಟ್ಟಾರೆ, ಕಲ್ಲತ್ತಿಗಿರಿಕ್ಷೇತ್ರದ ಜಲಪಾತ ಹತ್ತಾರು ಆಶ್ಚರ್ಯಗಳಿಗೆ ಸಾಕ್ಷಿಯಾಗಿದೆ. ಮೂಲವೇ ಗೊತ್ತಿಲ್ಲದ ಗಂಗೆಯ ಉಗಮಸ್ಥಾನ ಒಂದೆಡೆಯಾದ್ರೆ, ದುಷ್ಟಶಕ್ತಿಗಳನ್ನು ದೂರ ಮಾಡುವ ದೈವಶಕ್ತಿಗೆ ಈ ಕ್ಷೇತ್ರ ಹೆಸರುವಾಸಿ. ಪ್ರವಾಸಕ್ಕೂ ಸೈ, ಧಾರ್ಮಿಕ ನಂಬಿಕೆಗೂ ಸೈ ಎನ್ನುವ ಈ ಕ್ಷೇತ್ರ, ಕಾಫಿನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಿಲ್ಲ.

You Might Also Like

ಮಧ್ಯರಾತ್ರಿ ವಿಚಿತ್ರ ಕೂಗು – ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ. ಬ್ರೋ

TAGGED:ChikmagalurKalhattigiri FallsWater falls
Share This Article
Facebook Twitter Whatsapp Whatsapp Copy Link

Follow US

Find US on Social Medias
FacebookLike
InstagramFollow
Popular News View more
ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಆಪರೇಷನ್ ಸಿಂಧೂರ್ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಹರಿಯಾಣದ ವಿದ್ಯಾರ್ಥಿ ಬಂಧನ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

ಇಟಲಿಯ ಪ್ರಧಾನಿ ಮೆಲೋನಿಗೆ ಮಂಡಿಯೂರಿ ಸ್ವಾಗತ: ಅಲ್ಬೇನಿಯಾದ ಪ್ರಧಾನಿ ಎಡಿ ರಾಮರ ವಿಶಿಷ್ಟ ಗೌರವ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

130 ಐಟಿ ಕಂಪೆನಿಗಳಿಂದ 61,220 ಟೆಕ್ಕಿಗಳಿಗೆ ಉದ್ಯೋಗ ಕಡಿತ: ಬೆಂಗಳೂರಿನಲ್ಲಿ ತೀವ್ರ ಪರಿಣಾಮ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಭಾರತಕ್ಕೆ ಸಕ್ಕರೆ ಕಾಯಿಲೆ “ಟೈಮ್ ಬಾಂಬ್” ಎಂದ ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್: ಆರೋಗ್ಯಕರ ಜೀವನಕ್ಕೆ ಕರೆ

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಚಲಿಸುವ ಕಾರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಧೀರ ಮಹಿಳೆ: ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

"ಸೇನೆ ಬರಲಿ, ನೋಡಿಕೊಳ್ತೇನೆ": ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

“ಸೇನೆ ಬರಲಿ, ನೋಡಿಕೊಳ್ತೇನೆ”: ಎನ್‌ಕೌಂಟರ್‌ಗೆ ಮುನ್ನ ಉಗ್ರ ಅಮೀರ್‌ ನಜೀರ್‌ ವಾನಿಯ ತಾಯಿಯೊಂದಿಗೆ ನಡೆಸಿದ ವಿಡಿಯೊ ಕಾಲ್‌ ವೈರಲ್‌

- Advertisement -
Organic Ads - Best Digital Marketing Agency in BangaloreOrganic Ads - Best Digital Marketing Agency in Bangalore
Live Cricket Scores
About
  • About us
  • Advertise With Us
  • Contact
Quick Links
  • Privacy Policy
  • Terms & Conditions
  • Disclaimer
© Newsten Digital. All Rights Reserved.
Go to mobile version
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?